ಸುಜಾತ ಎಂಬ ಹೆಸರಿನಿಂದ ಹೆಚ್ಚು ಪರಿಚಿತರಾದ ಎಸ್. ರಂಗರಾಜನ್, ಒರ್ವ ತಮಿಳು ಭಾಷೆಯಲ್ಲಿ ಕಾದಂಬರಿ ಮತ್ತು ಚಿತ್ರಕಥೆಗಳನ್ನು ಬರೆದ ಭಾರತೀಯ ಲೇಖಕ. ಅವರು ಮೇ ೩, ೧೯೩೫ ರಂದು ಜನಿಸಿದರು. ಅವರು ೧೦೦ ಕ್ಕೂ ಹೆಚ್ಚು ಕಾದಂಬರಿಗಳು, ೨೫೦ ಸಣ್ಣ ಕಥೆಗಳು, ವಿಜ್ಞಾನದ ಹತ್ತು ಪುಸ್ತಕಗಳು, ಹತ್ತು ರಂಗ ನಾಟಕಗಳು ಮತ್ತು ಸಣ್ಣ ಕವನಗಳನ್ನು ರಚಿಸಿದ್ದಾರೆ. ಅವರು ತಮಿಳು ಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯ ಲೇಖಕರಲ್ಲಿ ಒಬ್ಬರಾಗಿದ್ದರು. ಅಲ್ಲದೆ ಆನಂದ ವಿಕಟನ್, ಕುಮುದಮ್ ಮತ್ತು ಕಲ್ಕಿಯಂತಹ ತಮಿಳು ನಿಯತಕಾಲಿಕಗಳಲ್ಲಿ ಸಾಮಯಿಕ ಅಂಕಣಗಳಿಗೆ ನಿಯಮಿತವಾಗಿ ಕೊಡುಗೆ ನೀಡುತ್ತಿದ್ದರು. ಅವರು ವ್ಯಾಪಕ ಓದುಗರನ್ನು ಹೊಂದಿದ್ದರು ಮತ್ತು ಕುಮುದಂನ ಸಂಪಾದಕರಾಗಿ ಅಲ್ಪಾವಧಿಗೆ ಸೇವೆ ಸಲ್ಲಿಸಿದರು. ಅಂತೆಯೇ ಹಲವಾರು ತಮಿಳು ಚಲನಚಿತ್ರಗಳಿಗೆ ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಬರೆದಿದ್ದಾರೆ. ಸುಜಾತ ರವರು ಇಂಜಿನಿಯರ್ ಆಗಿದ್ದರು; ಅವರು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ವಿದ್ಯುನ್ಮಾನ (ಎಲೆಕ್ಟ್ರಾನಿಕ್) ಮತ ಯಂತ್ರ(ಇವಿಎಮ್) ದ ವಿನ್ಯಾಸ ಮತ್ತು ಉತ್ಪಾದನೆಯನ್ನು ಮೇಲ್ವಿಚಾರಣೆ ಮಾಡಿದರು. ಇದು ಪ್ರಸ್ತುತ ಭಾರತದಾದ್ಯಂತ ಚುನಾವಣೆಗಳಲ್ಲಿ ಬಳಸಲ್ಪಡುತ್ತದೆ. ಲೇಖಕರಾಗಿ ಅವರು ಬಾಲಕುಮಾರನ್, ಮದನ್ ಸೇರಿದಂತೆ ಅನೇಕ ಲೇಖಕರಿಗೆ ಸ್ಫೂರ್ತಿ ನೀಡಿದರು. == ವೃತ್ತಿ == ಸುಜಾತ ರವರು ಪ್ರತಿಬಾರಿಯು ತಮ್ಮ ಪತ್ನಿಯ ಹೆಸರಿನೊಂದಿಗೆ ಬರವಣಿಗೆಯನ್ನು ಆರಂಭಿಸುತ್ತಿದ್ದರು. ಅವರ ತಮಿಳು ಸಾಹಿತ್ಯ ವೃತ್ತಿಜೀವನವು ನಾಲ್ಕು ದಶಕಗಳಿಗಿಂತಲೂ ಹೆಚ್ಚು ಕಾಲ ವ್ಯಾಪಿಸಿದೆ. ವೃತ್ತಿಯಲ್ಲಿ ಎಲೆಕ್ಟ್ರಾನಿಕ್ಸ್-ಇಂಜಿನಿಯರ್ ಆಗಿದ್ದ ಅವರು ತಂತ್ರಜ್ಞಾನದ ಭಾಷೆಯಲ್ಲಿ ಪ್ರವೀಣರಾಗಿದ್ದರು. ವ್ಯಾಪಕವಾಗಿ ಓದಿದ ಮತ್ತು ಜ್ಞಾನವುಳ್ಳ ಅವರು ತಮ್ಮ ಜ್ಞಾನವನ್ನು ಸರಳವಾದ ತಮಿಳಿನಲ್ಲಿ ಪ್ರಸ್ತುತಪಡಿಸಿದರು. ತಮಿಳು ಬರವಣಿಗೆಯು ಸಾಮಾಜಿಕ/ಕೌಟುಂಬಿಕ ನಾಟಕಗಳು ಮತ್ತು ಐತಿಹಾಸಿಕ ಕಾದಂಬರಿಗಳಿಂದ ಪ್ರಾಬಲ್ಯ ಹೊಂದಿದ್ದ ಸಮಯದಲ್ಲಿ ಅವರ ಕೃತಿಗಳು ಎದ್ದು ಕಾಣುತ್ತವೆ. ಜನಸಾಮಾನ್ಯರೊಂದಿಗೆ ಅವರ ಗುರುತಿಸುವಿಕೆ, ಮತ್ತು ಅವರ ಮಾತನಾಡುವ ರೀತಿ, ನಡವಳಿಕೆ, ಮನಸ್ಥಿತಿ ಅವರನ್ನು ಬಹು ಜನಸಂಖ್ಯಾ ವಿಭಾಗಗಳಲ್ಲಿ ಜನಪ್ರಿಯಗೊಳಿಸಲು ಸಹಾಯ ಮಾಡಿತು. ಅವರ ತಂತ್ರಜ್ಞಾನದ ಜನಪ್ರಿಯತೆಯು ಅವರ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದ್ದು, ಅವು ದಿನಮಣಿ ಕದಿರ್ ಮತ್ತು ಯೆನ್, ಯೆದರ್ಕು, ಜೂನಿಯರ್ ವಿಕಟನ್‌ನಲ್ಲಿ ಅವರ ಸಿಲಿಕಾನ್ ಚಿಪ್ ಬರವಣಿಗೆಯಿಂದ ಪ್ರಾರಂಭವಾಯಿತು. ಒಂದು ಹಂತದಲ್ಲಿ, ಅವರ ಬರಹಗಳು ಆನಂದ ವಿಕಟನ್, ಕುಮುದಮ್, ಕುಂಗುಮಮ್, ಕಲ್ಕಿ ಮತ್ತು ಧೀನಮಣಿ ಕದಿರ್ ಸೇರಿದಂತೆ ಹಲವಾರು ತಮಿಳು ವಾರಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಏಕಕಾಲದಲ್ಲಿ ಕಾಣಿಸಿಕೊಂಡವು. ನಂತರ ಅವರು ಹಲವಾರು ತಮಿಳು ಚಲನಚಿತ್ರ/ಚಿತ್ರಕಥೆಗಳಿಗೆ ಲೇಖಕರಾಗಿ ಕೊಡುಗೆ ನೀಡಿದರು. ಅವರ ಗಮನಾರ್ಹ ಚಲನಚಿತ್ರಗಳ ವಿಭಾಗಕ್ಕೆ ವಿಕ್ರಮ್, ತಿರುಡಾ ತಿರುಡಾ, ಬಾಯ್ಸ್ ಮತ್ತು ಶಿವಾಜಿ ಸೇರಿವೆ. ಅವರ ಹೆಚ್ಚಿನ ಆರಂಭಿಕ ಕಾದಂಬರಿಗಳು/ಕಥೆಗಳು ಪ್ರಿಯಾ, ಗಾಯತ್ರಿ, ಕರೈಯೆಲ್ಲಂ ಸೇನ್ಬಗಪೂ ಮತ್ತು ಆನಂದ ತಾಂಡವಂ ಸೇರಿದಂತೆ ಹಲವಾರು ಕಥೆಗಳು ಚಲನಚಿತ್ರಗಳಾಗಿ ಮಾಡಲ್ಪಟ್ಟವು. ನಂತರದ ದಿನಗಳಲ್ಲಿ ಅವರು ತಮ್ಮ ಬರವಣಿಗೆಯನ್ನು ಕತ್ರಾದುಮ್-ಪೆಟ್ರಾದುಮ್ನಂತಹ ಪ್ರಬಂಧಗಳಿಗೆ ಸೀಮಿತಗೊಳಿಸಿದರು. ಅವರು ಹೆಚ್ಚಿನ ಸಮಯವನ್ನು ಓದಲು ಪ್ರಾರಂಭಿಸಿದರು, ವಿಶೇಷವಾಗಿ ಹಳೆಯ ಅಪರೂಪದ ತಮಿಳು ಸಾಹಿತ್ಯ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟಿಂಗ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಬರಹಗಳನ್ನು ಓದುತ್ತಿದ್ದರು. == ಜೀವನಚರಿತ್ರೆ == ಸುಜಾತ ರಂಗರಾಜನ್ ಅವರು ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿ ಜನಿಸಿದರು. ಆದರೆ ಅವರ ತಂದೆಯ ಉದ್ಯೋಗದಲ್ಲಿ ಆಗಾಗ್ಗೆ ವರ್ಗಾವಣೆಯಾಗುತ್ತಿದ್ದರಿಂದ, ತಂದೆಯ ಅಜ್ಜಿಯ ಆರೈಕೆಯಲ್ಲಿ ತಮ್ಮ ಬಾಲ್ಯವನ್ನು ತಿರುಚ್ಚಿರಾಪಳ್ಳಿ ಬಳಿಯ ಶ್ರೀರಂಗಂನಲ್ಲಿ ಕಳೆದರು. === ಶಿಕ್ಷಣ === ಸುಜಾತ ಅವರು ಶ್ರೀರಂಗಂನ ಬಾಲಕರ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದರು. ನಂತರ ತಿರುಚಿರಾಪಳ್ಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅಲ್ಲಿ ಅವರು ೧೯೫೪ ಬ್ಯಾಚ್‌ನಲ್ಲಿ ಭೌತಶಾಸ್ತ್ರದಲ್ಲಿ ಬಿಎಸ್ಸಿ ಪದವಿ ಪಡೆದರು (೧೯೫೨-೫೪). ನಂತರ ಅವರು ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು, ಅಲ್ಲಿ ಅವರು ಅಬ್ದುಲ್ ಕಲಾಂ ಅವರ ಸ್ನೇಹಿತರಾಗಿದ್ದರು (ನಂತರ ಅವರು ಭಾರತದ ರಾಷ್ಟ್ರಪತಿಯಾದರು). ಜನಪ್ರಿಯ ತಮಿಳು ನಿಯತಕಾಲಿಕೆ(ಪತ್ರಿಕೆ)ಗಳಲ್ಲಿ ಪ್ರಕಟವಾದ ಅವರ ಸಣ್ಣ ಕಥೆಗಳು ಮತ್ತು ಧಾರಾವಾಹಿಗಳಿಂದ ಅವರ ಬರವಣಿಗೆಯ ಆಸಕ್ತಿಗಳಿಗೆ ಹೆಚ್ಚಿನ ಸ್ಫೂರ್ತಿ ಸಿಕ್ಕಿವೆ. === ಆರಂಭಿಕ ಬರಹಗಳು === ಶ್ರೀರಂಗತು ದೇವತಾಯಿಗಳು (ಶ್ರೀರಂಗದ ದೇವತೆಗಳು) ೧೯೪೦ ಮತ್ತು ೫೦ ರ ದಶಕದಲ್ಲಿ ಶ್ರೀರಂಗಂನಲ್ಲಿ ನಡೆದ ಘಟನೆಗಳನ್ನು ಆಧರಿಸಿದ ಸಣ್ಣ ಕಥೆಗಳ ಸರಣಿಯಾಗಿದ್ದು, ಇದು ಆನಂದ ವಿಕಟನ್‌ನಲ್ಲಿ ಪ್ರಕಟಗೊಂಡಿದೆ. ತಿರುಚಿರಾಪಳ್ಳಿಯ ಚಿಕ್ಕ ಪತ್ರಿಕೆಯಾದ ಶಿವಾಜಿಯು, ಸುಜಾತರವರು ವಿದ್ಯಾರ್ಥಿ ಆಗಿದ್ದ ಆ ದಿನಗಳ ಬಗ್ಗೆ ಒಂದು ಕಥೆಯನ್ನು ಪ್ರಕಟಿಸಿತು. ಅವರ ಮೊದಲ ಸಣ್ಣ ಕಥೆಯು ೧೯೬೨ ರಲ್ಲಿ ಕುಮುದಮ್ ನಿಯತಕಾಲಿಕ(ಮ್ಯಾಗಜಿನ್) ದಲ್ಲಿ ಪ್ರಕಟವಾಯಿತು. ಅವರ ಕೊಲೈಯುತಿರ್ ಕಲಾಂ ಒಂದು ರೋಮಾಂಚಕಾರಿ ಭೂತ-ವಿಷಯದ ಕಾದಂಬರಿ. === ಇಂಜಿನಿಯರಿಂಗ್ ವೃತ್ತಿ === ಅವರು ಭಾರತ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಯಲ್ಲಿ ಕೆಲಸ ಮಾಡಿದ್ದರು ಮತ್ತು ನಿವೃತ್ತಿಯಾಗುವ ಮೊದಲು ಭಾರತದ ಬೆಂಗಳೂರಿನಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಿದ್ದರು. ನಂತರ ಭಾರತದ ಚೆನ್ನೈನಲ್ಲಿ ಅವರು ತಮ್ಮ ಕೊನೆಯ ದಿನಗಳವರೆಗೂ ವಾಸಿಸುತ್ತಿದ್ದರು. ಇಂಜಿನಿಯರ್ ಆಗಿರುವ ಸುಜಾತರವರು ದೇಶದ ಭವಿಷ್ಯದ ಬಗ್ಗೆ ಚಿಂತಕರಾಗಿದ್ದರು. ಅಂತೆಯೇ ಅವರು, ಭಾರತದಲ್ಲಿ ಕಂಡುಹಿಡಿದ ವಿದ್ಯುನ್ಮಾನ ಮತಯಂತ್ರದ ಅಭಿವೃದ್ಧಿಯ ಹಿಂದಿನ ಪ್ರಮುಖ ವ್ಯಕ್ತಿಯಾಗಿದ್ದರು. ಅಲ್ಲದೆ ಪರ್ಸನಲ್ ಕಂಪ್ಯೂಟರ್‌ಗಳ ದಿನಗಳು ಪ್ರಾರಂಭವಾಗುವ ಮೊದಲು, ಅವರು ಸುಧಾರಿತ ಪದ ಸಂಸ್ಕರಣೆಯ ಅಭಿವೃದ್ಧಿಯನ್ನು ಪ್ರಾರಂಭಿಸಿದರು. ಪಾಸ್‌ವರ್ಡ್, ಫೈಲ್, ಡೈರೆಕ್ಟರಿ ಇತ್ಯಾದಿ ಕಂಪ್ಯೂಟರ್ ಪದಗಳಿಗೆ ಹೊಸ ತಮಿಳು ಪದಗಳನ್ನು ಸೃಷ್ಟಿಸಲು ಅವರು ಹೆಸರುವಾಸಿಯಾಗಿದ್ದಾರೆ. ಈ ಪದಗಳನ್ನು ಇಂದಿನ ಅನೇಕ ಸಾಫ್ಟ್‌ವೇರ್ ಕಂಪನಿಗಳು ತಮ್ಮ ಸಾಫ್ಟ್‌ವೇರ್/ಸಾಫ್ಟ್‌ವೇರ್ ಉತ್ಪನ್ನಗಳನ್ನು ತಮಿಳಿಗೆ ಭಾಷಾಂತರಿಸಲು ಅಳವಡಿಸಿಕೊಂಡಿವೆ. == ಕೃತಿಗಳು == ಎನ್ ಇನಿಯ ಆಯಂತಿರ ಮೀಂದುಂ ಜೀನೋ ಕೊಲೈಯುತಿರ್ ಕಲಾಂ ಅದಳಿನಾಳ ಕಾದಲ್ ಸೇವೀರ್ ಸೊರ್ಗ ತೀವು ಕರಿಯೆಲ್ಲಂ ಶೆಂಬಗಾಪೂ ನೀರಮಾತ್ರ ವನವಿಲ್ ಕೊಲೈ ಅರಂಗಂ ನಿಲ್, ಕವಾನಿ, ಠಕ್ಕು (೧೯೭೦) ಓರೆ ಒರು ತ್ರೋಗಮ್ (೧೯೮೩) ವಿರುಂಬಿ ಸೊನ್ನ ಪೊಯ್ಗಲ್ (೧೯೮೭) ಇಳಮೈಯಿಲ್ ಕೋಲ್ (೧೯೮೭) ಐಂಥವತು ಅಥಿಯಾಯಂ (೨೦೦೦) ಮೀಂದುಂ ಒರು ಕುಟ್ರಂ ತೂಂಡಿಲ್ ಕಥೈಗಲ್ ಕಂಪ್ಯೂಟರ್ ಗ್ರಾಮಮ್ ಒರು ನಡುಪ್ಪಗಲ್ ಮರಣಂ ಮೇಲುಮ್ ಒರು ಕುಟ್ರಂ ತಂಗ ಮುಡಿಚು ರೈಲ್ ಪುನ್ನಗೈ ಶಿವಣ್ಣ ಕೈಕಲ್ ಮನೈವಿ ಕಿಡೈತಾಳ್ ಪಿರಿವೊಂ ಸಂಧಿಪ್ಪೊಂ ಶ್ರೀರಂಗತ್ತು ದೇವದೈಗಲ್ ಮತ್ಯಾಮಾರ್ ಸಿಂಗರಾಮಯ್ಯಂಗಾರ್ ಉಲ್ಲಂ ತುರಂತವನ ತೇಡತೆ ಅವರು ವೈರಂಗಲ್ ವಿಝುಂಧ ನಚ್ಚತ್ತಿರಂ ೬೯೬೧ ಅಂದ್ರು ಅನ್ ಅರುಕಿಲ್ == ಪ್ರಶಸ್ತಿಗಳು == ಸುಜಾತ ಅವರು ತಮ್ಮ ಪುಸ್ತಕಗಳು, ನಿಯತಕಾಲಿಕೆ ಕೊಡುಗೆಗಳು ಮತ್ತು ಇತರ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ವಿಜ್ಞಾನದ ಬಗ್ಗೆ ತಿಳಿವು ಮೂಡಿಸುವಂತಹ ಕೆಲಸ ಮಾಡಿದರು. ಅಂತೆಯೇ ಈ ಸಾಧನೆಗೆ ಅವರಿಗೆ ೧೯೯೩ ರಲ್ಲಿ ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಿಂದ ಪ್ರಶಸ್ತಿಯನ್ನು ನೀಡಿದರು. ವಿದ್ಯುನ್ಮಾನ ಮತಯಂತ್ರಕ್ಕೆ ದೊರೆತ ವಾಸ್ವಿಕ್ ಪ್ರಶಸ್ತಿ. ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ. ದೂರದರ್ಶನದ ಅತ್ಯುತ್ತಮ ಧಾರಾವಾಹಿ "ಮಹಾನ್ ರಾಮಾನುಜರ್" ಗಾಗಿ ಮೈಲಾಪುರ್ ಅಕಾಡೆಮಿ ಪ್ರಶಸ್ತಿ. ೧೯೯೯ ರಲ್ಲಿ ತಮಿಳುನಾಡು ಸಿನಿಮಾ ಕಲೈಮಂದ್ರಂನಿಂದ ಅತ್ಯುತ್ತಮ ಬರಹಗಾರ ಪ್ರಶಸ್ತಿ. == ಶೈಲಿ ಮತ್ತು ಪ್ರಭಾವ == ಸುಜಾತ ಅವರು ಬಹುಮುಖ ತಮಿಳು ಲೇಖಕರಾಗಿದ್ದರು. ಹಲವಾರು ಸಣ್ಣ ಕಥೆಗಳು, ಕಾದಂಬರಿಗಳು, ಕವಿತೆಗಳು, ನಾಟಕಗಳು, ಚಲನಚಿತ್ರಗಳಿಗೆ ಚಿತ್ರಕಥೆಗಳು, ಜನಪ್ರಿಯ ವಿಜ್ಞಾನದ ಲೇಖನಗಳು ಮತ್ತು ಇತರ ಕಾಲ್ಪನಿಕವಲ್ಲದ ಲೇಖನಗಳು ಅವರ ಬರವಣಿಗೆಯ ಶೈಲಿಗೆ ಕಾರಣವಾಗಿವೆ. ಸುಜಾತಾ ಅವರು ತಮಿಳಿನಲ್ಲಿ ಹಲವಾರು ವೈಜ್ಞಾನಿಕ ಕಥೆಗಳನ್ನು ಬರೆದರು ಮತ್ತು ಸಾಮಾನ್ಯರಿಗೆ ವಿಜ್ಞಾನವನ್ನು ಸರಳವಾಗಿ ವಿವರಿಸಲು ಪ್ರಯತ್ನಿಸಿದರು. ಜೂನಿಯರ್ ವಿಕಟನ್‌ನಂತಹ ನಿಯತಕಾಲಿಕೆಗಳಲ್ಲಿ ವಿಜ್ಞಾನದ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಿದ್ದರು. ಅವರ ವಿಜ್ಞಾನದ ಎಫ್‍ಎಕ್ಯೂ ಅನ್ನು ವಿಕಟನ್ ಪಬ್ಲಿಕೇಷನ್ಸ್‌ನಿಂದ ಯೆನ್ ಎಥರ್ಕು ಎಪ್ಪಡಿ ಮತ್ತು ಅತಿಶಯ ಉಲಗಂ ಎಂಬ ಪ್ರತ್ಯೇಕ ಪುಸ್ತಕಗಳಾಗಿ ಬಿಡುಗಡೆ ಮಾಡಲಾಗಿದೆ. ಅನಂತ ವಿಕಟನದಲ್ಲಿ "ಕತ್ರದುಂ, ಪೆಟ್ರದುಂ" ಮತ್ತು ಕುಮುದಂ ಮತ್ತು ಕುಂಗುಮದಲ್ಲಿ "ಸುಜಾತ ಬತ್ತಿಲ್‌ಗಳು" ಎಂಬ ಪುಸ್ತಕಗಳಲ್ಲಿ ಇವರು ಕೆಲಸ ಮಾಡಿದ್ದಾರೆ. == ನಿಧನ == ಮಧುಮೇಹದಿಂದ ಬಳಲುತ್ತಿದ್ದ ಮತ್ತು ಬೈಪಾಸ್ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸುಜಾತಾ ಅವರು ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದ ನಿಧನರಾದರು. == ಚಲನಚಿತ್ರಗಳಿಗೆ ಕೊಡುಗೆ == ರಂಗರಾಜನ್ ಅವರು ತಮ್ಮ ಬರವಣಿಗೆಯ ಕೌಶಲ್ಯ ಮತ್ತು ಪರಿಣತಿಯನ್ನು ವಿಜ್ಞಾನದಿಂದ ಚಲನಚಿತ್ರಗಳಿಗೆ ವಿಸ್ತರಿಸಿದರು. ಈ ಪ್ರಯತ್ನಗಳ ಮೂಲಕ ಮಾಡಿದ ಮೊದಲನೆಯ ಚಲನಚಿತ್ರಗಳು ಗಾಯತ್ರಿ ಮತ್ತು ಪ್ರಿಯಾ. ಪ್ರಿಯಾದಲ್ಲಿ, ಅವರ ಕಾಲ್ಪನಿಕ ಪಾತ್ರವಾದ ಗಣೇಶ್ ಪಾತ್ರವನ್ನು ರಜನಿಕಾಂತ್ ನಿರ್ವಹಿಸಿದ್ದಾರೆ. ಕಮಲ್ ಹಾಸನ್ ಅವರ ವಿಕ್ರಮ್ ಚಿತ್ರಕ್ಕೆ ರಂಗರಾಜನ್ ಅವರು ಕಥೆ ಬರೆದಿದ್ದಾರೆ. ಮಣಿರತ್ನಂ ನಿರ್ದೇಶನದ ರೋಜಾ ಚಿತ್ರಕ್ಕೆ ಇವರು ಸಂಭಾಷಣೆ ಬರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಂಗರಾಜನ್ ಅವರು ಮಣಿರತ್ನಂ (ಕನ್ನತಿಲ್ ಮುತ್ತಮಿತ್ತಲ್, ಆಯಿತ ಎಳುತ್ತು, ಇತ್ಯಾದಿ), ಶಂಕರ್ (ಭಾರತೀಯ, ಮುಧಲ್ವನ್, ಬಾಯ್ಸ್, ಶಿವಾಜಿ: ದಿ ಬಾಸ್ ಮತ್ತು ಎಂಥಿರನ್: ದಿ ರೋಬೋಟ್) ಮತ್ತು ಅಳಗಂ ಪೆರುಮಾಳ್ (ಉದಯ) ಎನ್ನುವ ಚಲನಚಿತ್ರ ನಿರ್ದೇಶಕರೊಂದಿಗೆ ಅವರ ಚಲನಚಿತ್ರಗಳಿಗೆ ಸಂಭಾಷಣೆಯನ್ನು ಬರೆದಿದ್ದಾರೆ. ಅಂತೆಯೇ ಇವರು ಮೀಡಿಯಾ ಡ್ರೀಮ್ಸ್ ಬ್ಯಾನರ್‌ಗೆ ಸಹ-ನಿರ್ಮಾಪಕರಾಗಿದ್ದರು. ಅವರು ೨೭ ಫೆಬ್ರವರಿ ೨೦೦೮ ರಂದು ಸಾಯುವ ಮೊದಲು ಶಂಕರ್ ಅವರ ಎಂಥಿರನ್‌ ಕಥೆಯ ಸಂಭಾಷಣೆಯಲ್ಲಿ ಕೆಲಸ ಮಾಡುತ್ತಿದ್ದರು. === ಚಲನಚಿತ್ರಗಳು === ಬರಹಗಾರರಾಗಿ ಕಥೆ ಬರೆದ ಚಲನಚಿತ್ರ ಗಾಯತ್ರಿ (೧೯೭೭) ಪ್ರಿಯಾ (೧೯೭೮) ಯಾರುಕ್ಕು ಯಾರ್ ಕಾವಲ್ (೧೯೭೯) ಕರೈಯೆಲ್ಲಂ ಶೆನ್ಬಗಾಪೂ (೧೯೮೧) ಪೊಯ್ ಮುಗಂಗಲ್ (೧೯೮೬) ವಿಕ್ರಮ್ (೧೯೮೬) ಆನಂದ ತಾಂಡವಂ (೨೦೦೯) ನಿರ್ಮಾಪಕರಾಗಿ ರಚಿಸಿದ ಚಲನಚಿತ್ರ ಭಾರತಿ (೨೦೦೦) ಲಿಟಲ್ ಜಾನ್ (೨೦೦೧) ನೀಲಾ ಕಾಲಮ್ (೨೦೦೧) ಪಾಂಡವರ ಭೂಮಿ (೨೦೦೧) === ಸಂಭಾಷಣೆ === ನಿನೈತಲೆ ಇನಿಕ್ಕುಮ್ (೧೯೭೯) ನಾಡೋಡಿ ತೆಂಡ್ರಾಲ್ (೧೯೯೨) ರೋಜಾ (೧೯೯೨) ತಿರುಡಾ ತಿರುಡಾ (೧೯೯೩) ಭಾರತೀಯ (೧೯೯೬) ಉಯಿರೆ (೧೯೯೮) ಕನ್ನೆಧಿರೆ ತೊಂಡ್ರಿನಾಲ್ (೧೯೯೮) ಮುಧಲ್ವನ್ (೧೯೯೯) ಕಂಡುಕೊಂಡೈನ್ ಕಂಡುಕೊಂಡೈನ್ (೨೦೦೦) ನೀಲಾ ಕಾಲಮ್ (೨೦೦೧) ಕನ್ನತಿಲ್ ಮುತ್ತಮಿತ್ತಲ್ (೨೦೦೨) ವಿಶಿಲ್ (೨೦೦೩) ಬಾಯ್ಸ್ (೨೦೦೩) ಚೆಲ್ಲಮೆ (೨೦೦೪) ಆಯುತ ಎಳುತ್ತು (೨೦೦೪) ಕಂಗಲಾಲ್ ಕೈದು ಸೇ (೨೦೦೪) ಉದಯ (೨೦೦೪) ದಿ ಲೆಜೆಂಡ್ ಆಫ್ ಬುದ್ಧ (೨೦೦೪) (ಇಂಗ್ಲಿಷ್) ಉಲ್ಲಂ ಕೆಟ್ಕುಮೆ (೨೦೦೫) ಅನ್ನಿಯನ್ (೨೦೦೫) ಶಿವಾಜಿ (೨೦೦೭) ಎಂಥಿರನ್ (೨೦೧೦) == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ://../general_knowledge/-. 2021-06-13 ವೇಬ್ಯಾಕ್ ಮೆಷಿನ್ ನಲ್ಲಿ. ://..//6356-------. 2019-09-04 ವೇಬ್ಯಾಕ್ ಮೆಷಿನ್ ನಲ್ಲಿ. ://../--/-07/. ://../